Tuesday, March 31, 2020

ಯಾಕೆ ಲಾಕ್ ಡೌನ್ ಅನ್ನುವವರಿಗೆ ಇಲ್ಲಿದೆ ಉತ್ತರ


ಕರೋನಾ ಎದುರಾಗಿರುವ ಈ ಸಂದರ್ಭದಲ್ಲಿ ನಮ್ಮಲ್ಲಿ 4 ಗುಂಪಿನ ಜನರಿದ್ದಾರೆ. ಎ, ಬಿ, ಸಿ ಮತ್ತು ಡಿ ಅಂದುಕೊಳ್ಳೋಣ. 

'ಎ' ಗುಂಪು:
 
'ಎ' ಗುಂಪಿನ ಜನರು ಸೋಂಕನ್ನು ಹೊಂದಿರುವವರು. ಸೋಂಕಿನ ಗುಣಲಕ್ಷಣಗಳಿಂದ ಇವರನ್ನು ಪತ್ತೆ ಹಚ್ಚುವುದು ಸುಲಭ. ಈ ಗುಂಪಿನ ಹೆಚ್ಚು ಜನರು ಚಿಕಿತ್ಸೆಯನ್ನು ಪಡೆಯುತ್ತಿರುತ್ತಾರೆ. 

'ಸಿ' ಗುಂಪು:

'ಎ' ಗುಂಪಿನ ಜನರು, ತಮ್ಮ ಅರಿವಿದ್ದು ಭೇಟಿ ಮಾಡುವ ವ್ಯಕ್ತಿಗಳಾದ ಸ್ನೇಹಿತರು, ಬಂಧುಗಳು, ಸಹವರ್ತಿಗಳು ಹಾಗೂ ಬ್ಯಾಂಕ್, ಆಸ್ಪತ್ರೆ, ಹೋಟೆಲ್ ಮತ್ತು ಇತರೆಡೆ ಭೇಟಿಯಾಗುವವರು 'ಸಿ' ಗುಂಪಿಗೆ ಸೇರಿರುವವರು. ಈ ಗುಂಪಿನ ಜನರು ಸೋಂಕಿತರಿಗೆ ತಿಳಿದವರೇ ಆಗಿರುವುದರಿಂದ, ಎಷ್ಟೇ ಜನರಿದ್ದರೂ ಇವರನ್ನು ಕಂಡುಹಿಡಿಯುವುದು ಸುಲಭ ಹಾಗೂ ಸೋಂಕಿನ ನಿರ್ವಹಣೆ ಸಹ ಸಾಧ್ಯ.    

'ಬಿ' ಗುಂಪು: 

'ಎ' ಗುಂಪಿನ ಜನರು ತಮ್ಮವರಾದ 'ಸಿ' ಗುಂಪಿನ ಜನರನ್ನು ಭೇಟಿಯಾಗುವ ಸಂದರ್ಭಗಳಲ್ಲಿ ಅರಿಯದೆ ಸಂಪರ್ಕಕ್ಕೆ ಬರುವ ಜನರು ಇವರು. ಅಂದರೆ, ಬಸ್ಸು ಮತ್ತು ರೈಲು ನಿಲ್ದಾಣಗಳಲ್ಲಿ, ವ್ಯಾಪಾರ ಮಳಿಗೆ, ಹೋಟೆಲ್ ಮತ್ತು ಇತರೆಡೆ ಅಕ್ಕ ಪಕ್ಕ ಸಾಗುವಾಗ ಸೋಂಕಿತರಾಗುವ ಅಪರಿಚಿತರು. ಈ ಗುಂಪಿನ ಜನರಿಗೆ ತಾವು  ಸೋಂಕಿತರಾಗಿರುವುದು ಖುದ್ದು ಅವರಿಗೆ ತಿಳಿಯದಿರುವುದರಿಂದ, ಈ ಗುಂಪಿನ ಜನರನ್ನು ಪತ್ತೆ ಹಚ್ಚುವುದು ಕಷ್ಟ. ಈ ಗುಂಪಿನ ಜನರಿಂದಲೇ ಸೋಂಕು  ಹೆಚ್ಚು ವ್ಯಾಪಕವಾಗಿ ಹರಡುವುದು. 

'ಡಿ' ಗುಂಪು: 

ಎಲ್ಲೂ ಹೊರಗಡೆ ಹೋಗದೆ ಮನೆಯಲ್ಲಿಯೇ ಉಳಿಯುವ ಜನರ ಗುಂಪು ಇದು. ಆದರೆ, ಈ ಗುಂಪಿನ ಜನರು ಹೊರ ಹೋಗಿ 'ಬಿ' ಗುಂಪಿನ ಸಂಪರ್ಕಕ್ಕೆ ಬಂದಾಗ 'ಡಿ' ಗುಂಪು ಸಹ ಹೊಸ 'ಬಿ' ('ಬಿ2') ಗುಂಪು ಆಗಿ ಪರಿವರ್ತಿತಗೊಳ್ಳುತ್ತದೆ ಹಾಗೂ ಸಮಸ್ಯೆಯನ್ನು ಹೆಚ್ಚಿಸುತ್ತದೆ.   

ಈಗ ಎರಡು ವಾರಗಳ ಲಾಕ್ ಡೌನ್ ಯಾಕೆ ಅಂದರೆ, ಸೋಂಕು ತನ್ನ ಗುಣಲಕ್ಷಣಗಳನ್ನು ತೋರಿಸಲು ತೆಗೆದುಕೊಳ್ಳುವ ಸಮಯ (ಸೋಂಕಿನ ಇನ್ಕ್ಯುಬೇಷನ್ ಸಮಯ ಎನ್ನುತ್ತಾರೆ) 2 ವಾರ. ಈ 2 ವಾರಗಳ ಲಾಕ್ ಡೌನ್ ಸಮಯದಲ್ಲಿ ನಮಗೆ ಅರಿಯದೆ ಇರುವ 'ಬಿ' ಗುಂಪಿನಲ್ಲಿರುವ ಸೋಂಕಿತರಲ್ಲಿ ರೋಗದ ಗುಣಲಕ್ಷಣಗಳು ಕಂಡುಬಂದು ಅವರನ್ನು ಗುರುತು ಹಿಡಿದು, ಚಿಕಿತ್ಸೆಗೆ ಒಳಪಡಿಸಬಹುದು.  ಅಲ್ಲದೆ, ಬಿ2 ಗುಂಪಿಗೆ ಹೆಚ್ಚು ಜನರು ಸೇರದಂತೆ ತಡೆಯಬಹುದು. ಆ ಮೂಲಕ ದೇಶದಲ್ಲಿ ಸೋಂಕನ್ನು ಶೀಘ್ರವಾಗಿ ತಹಬದಿಗೆ ತರಬಹುದು. ಹಾಗಾಗಿ, ಈ ಸಮಯಗಳಲ್ಲಿ ಸಲಹೆಯನ್ನು ಕಡೆಗಣಿಸಿ, ಅನವಶ್ಯಕ ಪ್ರಯಾಣಗಳನ್ನು ಮಾಡುವುದು ಬರಿ ನಮಗಲ್ಲದೆ ಇಡೀ ದೇಶಕ್ಕೆ ಅಪಾಯಕಾರಿ. 

(ಸಂದೇಶವೊಂದರ ಭಾವಾನುವಾದ)

ನನ್ನ ಮಾತು:         

ಹಲವು ಸಂದರ್ಭಗಳಲ್ಲಿ ವ್ಯಕ್ತಿಯ ಸ್ವಹಿತಾಸಕ್ತಿ ಹಾಗೂ ದೇಶದ ಹಿತ ಯಾವಾಗಲೂ ವಿರುದ್ಧ ದಿಕ್ಕಿನಲ್ಲಿ ಚಲಿಸುವಂತದ್ದಾಗಿರುತ್ತದೆ. ಅಂದರೆ, ವ್ಯಕ್ತಿ ತನ್ನ ಹಿತಕ್ಕಾಗಿ ಮಾಡುವ ಕಾರ್ಯಗಳು ದೇಶಕ್ಕೆ ಮಾರಕವಾಗಿರೊತ್ತೆ. ಕೆಲವೊಮ್ಮೆ ಮಾತ್ರ ತನ್ನ ಹಿತ ದೇಶದ ಹಿತವಾಗುವ ಸಂದರ್ಭವೊದಗಿ ಬರುತ್ತದೆ. ಅಂತ ಒಂದು ಸಂದರ್ಭ ಈಗ ನಮ್ಮೆದುರಿದೆ. 

ಮಾರಕ ಕರೋನಾದ ವಿರುದ್ಧ ಸಾರಿರುವ ಸಮರದಲ್ಲಿ ದೇಶವನ್ನ ಗೆಲ್ಲಿಸೋಕೆ ನಾವು ಮಾಡಬೇಕಾಗಿರೋದು ನಮಗೆ ಸೋಂಕು ಬರದಂತೆ ನೋಡಿಕೊಳ್ಳುವುದು. ನಾವು ಪ್ರತಿಯೊಬ್ಬರೂ ಸೋಂಕಿನಿಂದ ಪಾರಾಗುವ ಪಣ ತೊಟ್ಟಲ್ಲಿ, ದೇಶ ಈ ಯುದ್ಧವನ್ನ ಗೆಲ್ಲುತ್ತೆ. ಈ ಸಮಯದಲ್ಲಿ ನಾವು ತೋರಿಸೋ ನಿರ್ಲಕ್ಷ್ಯತನ ನಮ್ಮವರ ಪ್ರಾಣಕ್ಕೆ ಕುತ್ತಾಗಲಿದೆ. ಸೋಂಕಿನ ಸರಪಳಿಯಲ್ಲಿ ನಾವೂ ಒಂದು ಕೊಂಡಿಯಾಗುವುದನ್ನು ತಪ್ಪಿಸಿದರೆ ಇಡೀ ಸೋಂಕಿನ ಸಂಕೋಲೆಯೇ ಕೊನೆಯಾಗಿಸಬಹುದು. ಆ ನಿಟ್ಟಿನಲ್ಲಿ ಜನತಾ ಕರ್ಫ್ಯೂ ಒಂದು ಸರಿದಾರಿ, ಪಾಲಿಸೋಣ ನಾವೆಲ್ಲಾ ಸೇರಿ.  

ಜವಾಬ್ದಾರಿಯುತ ಪ್ರಜೆಗಳಾಗೋಣ, ಸೋಂಕನ್ನು ಹೊಡೆದೋಡಿಸೋಣ.   

- ರೋಹಿತ್ ಕುಮಾರ್ ಹೆಚ್ ಜಿ 



#Corona #ಕರೋನಾ #ಜನತಾ_ಕರ್ಫ್ಯೂ #ಜವಾಬ್ದಾರಿ #CoViD19

No comments:

Post a Comment

ಕಾದು ನೋಡಿ

ಹೊಸ ಅಂಕಣ...

"ತೀರ"


ಆತ್ಮೀಯ ಒಡನಾಡಿಗಳೇ,


೨೦೧೦-೨೦೧೧ ನೇ ಸಾಲಿನ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ವಿಶೇಷವಾಗಿ ಮಾಡಲ್ಪಟ್ಟ "ತೀರ" ಎಂಬ ವೀಡಿಯೋ ತುಣುಕನ್ನು ಈ ಮೂಲಕ ನಮ್ಮ ಬ್ಲಾಗ್ ನಲ್ಲಿ upload ಮಾಡುತ್ತಿದ್ದೇವೆ. ನಮ್ಮ ವಿಭಾಗದಲ್ಲಿನ ದಿನಗಳ ನೆನಪನ್ನ ಮತ್ತೆ ನಿಮ್ಮಲ್ಲಿಗೆ ತರುವಂತಹ ಒಂದು ಪುಟ್ಟ ಪ್ರಯತ್ನವು ಇದಾಗಿದ್ದು, ನಿಮ್ಮೆಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದು ನಂಬಿದ್ದೇವೆ.


ನಿಮ್ಮ ಪ್ರತಿಯೊಂದು ಅನಿಸಿಕೆಗಳಿಗೂ ಆದರದ ಸ್ವಾಗತ.



ಈ ವೀಡಿಯೊ ತುಣುಕನ್ನು ತಯಾರಿಸಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೋರ್ವರಿಗೂ ಈ ಮೂಲಕ ಧನ್ಯವಾದವನ್ನು ಅರ್ಪಿಸುತ್ತೇವೆ.


- ರೋಹಿತ್

ತೀರ ಭಾಗ - 1

ತೀರ ಭಾಗ - 2

ತೀರ ಭಾಗ - 3

ನನ್ನ ಬೆರಳಿನೊಡನೆ ಆಡಿದ ಕನಯ್ಯ...

ನನ್ನ ಬೆರಳಿನೊಡನೆ ಆಡಿದ ಕನಯ್ಯ...