ಕಳೆದ ವರುಷ ಬರೆದ ಕವನ..
ಇನ್ನು ಅನ್ವಯವಾಗುವಂತಿದೆ ನಮ್ಮ ಜೀವನ..
ಮುಂದಿನ ವರುಷಕ್ಕಾದರೂ ಉಪಯೋಗವಾಗದಿರಲಿ ಈ ನನ್ನ ಕವನ...
ಆಚರಿಸಲೇನಿದೆ ??
ಸಾಧಿಸಿಹುದೇನಿದೆ..?
ಕಣ್ಣೀರ ಹಿಡಿಯಲಿದ್ದ ಕರವು, ಕಣ್ಣೊಳಗೆ ಕೈ ಇಡುತಿರೆ..
ಹುಚ್ಚು ಬಯಕೆಗಳೇ ಹೆಚ್ಚಾಗಿ,
ಕೊಚ್ಚಿ ಹೋಗಿಹುದೇ ಮಾನವತೆ..?
ಜನರ ಸಂತೆಯಲ್ಲಿ ಮನುಜನೇ ಇಲ್ಲವೇ??
ಭರತೆ, ತಾಯಿ, ತಂಗಿಯರ ಸೆರಗ ಎಳೆವ ಸತ್-ಪ್ರಜೆಗಳಿರೆ,
ಹಬ್ಬದಲೂ ಮನೆಯೊಳಗೇ ಸೂತಕವೇ..
ಹಲವು ಮುಗ್ದ ಮೌನೆಯರ ನೋವ ತೊಟ್ಟಿಲಲಿ,
ಕಂಬನಿಯ ಕೂಸದು ಎದ್ದಿರಲು,
ಆಚರಿಸಲೇನಿದೆ??
ನಮ್ಮೊಳಗಿನ ರಕ್ಕಸನ ಕೊಲ್ಲುವ ಅಸ್ತ್ರವ ಹುಡುಕಲಾಗದೇ??
ಸಾಧಿಸುವುದಲ್ಲಿದೆ..
ಮಾನವನಾಗುವುದರಲ್ಲಿದೆ..
ಹೊಸ ಕರೆಯಿದು ಹಳೆಯ ಕಲೆಗಳ, ಕೊಳೆಗಳ
ಬುಡ ಪೂರ್ತಿ ತೊಳೆದು ಹಾಕಲಿ,
ಸುಖ ಶಾಂತಿ ತರಲಿ ಸರ್ವರಲಿ..
ಹೊಸ ವರುಷವು ನಾಡಿನ, ನಮ್ಮೊಳಗಿನ ಅಂಧಕಾರವನ್ನು ನೀಗಿಸಲಿ..
ಮನುಜಮತವ ಮೊಳಗಿಸಲಿ..
- ರೋಹಿತ್
ಸಾಧಿಸಿಹುದೇನಿದೆ..?
ಕಣ್ಣೀರ ಹಿಡಿಯಲಿದ್ದ ಕರವು, ಕಣ್ಣೊಳಗೆ ಕೈ ಇಡುತಿರೆ..
ಹುಚ್ಚು ಬಯಕೆಗಳೇ ಹೆಚ್ಚಾಗಿ,
ಕೊಚ್ಚಿ ಹೋಗಿಹುದೇ ಮಾನವತೆ..?
ಜನರ ಸಂತೆಯಲ್ಲಿ ಮನುಜನೇ ಇಲ್ಲವೇ??
ಭರತೆ, ತಾಯಿ, ತಂಗಿಯರ ಸೆರಗ ಎಳೆವ ಸತ್-ಪ್ರಜೆಗಳಿರೆ,
ಹಬ್ಬದಲೂ ಮನೆಯೊಳಗೇ ಸೂತಕವೇ..
ಹಲವು ಮುಗ್ದ ಮೌನೆಯರ ನೋವ ತೊಟ್ಟಿಲಲಿ,
ಕಂಬನಿಯ ಕೂಸದು ಎದ್ದಿರಲು,
ಆಚರಿಸಲೇನಿದೆ??
ನಮ್ಮೊಳಗಿನ ರಕ್ಕಸನ ಕೊಲ್ಲುವ ಅಸ್ತ್ರವ ಹುಡುಕಲಾಗದೇ??
ಸಾಧಿಸುವುದಲ್ಲಿದೆ..
ಮಾನವನಾಗುವುದರಲ್ಲಿದೆ..
ಹೊಸ ಕರೆಯಿದು ಹಳೆಯ ಕಲೆಗಳ, ಕೊಳೆಗಳ
ಬುಡ ಪೂರ್ತಿ ತೊಳೆದು ಹಾಕಲಿ,
ಸುಖ ಶಾಂತಿ ತರಲಿ ಸರ್ವರಲಿ..
ಹೊಸ ವರುಷವು ನಾಡಿನ, ನಮ್ಮೊಳಗಿನ ಅಂಧಕಾರವನ್ನು ನೀಗಿಸಲಿ..
ಮನುಜಮತವ ಮೊಳಗಿಸಲಿ..
- ರೋಹಿತ್
www.facebook.com/rohitkumarhg1