Tuesday, December 31, 2013

ಬದುಕು ಬದಲಾಗಲಿ

ಕಳೆದ ವರುಷ ಬರೆದ ಕವನ.. 
ಇನ್ನು ಅನ್ವಯವಾಗುವಂತಿದೆ ನಮ್ಮ ಜೀವನ.. 
ಮುಂದಿನ ವರುಷಕ್ಕಾದರೂ ಉಪಯೋಗವಾಗದಿರಲಿ ಈ ನನ್ನ ಕವನ... 

ಆಚರಿಸಲೇನಿದೆ ?? 
ಸಾಧಿಸಿಹುದೇನಿದೆ..?
ಕಣ್ಣೀರ ಹಿಡಿಯಲಿದ್ದ ಕರವು, ಕಣ್ಣೊಳಗೆ ಕೈ ಇಡುತಿರೆ.. 
ಹುಚ್ಚು ಬಯಕೆಗಳೇ ಹೆಚ್ಚಾಗಿ,
ಕೊಚ್ಚಿ ಹೋಗಿಹುದೇ ಮಾನವತೆ..?
ಜನರ ಸಂತೆಯಲ್ಲಿ ಮನುಜನೇ ಇಲ್ಲವೇ??
ಭರತೆ, ತಾಯಿ, ತಂಗಿಯರ ಸೆರಗ ಎಳೆವ ಸತ್-ಪ್ರಜೆಗಳಿರೆ,
ಹಬ್ಬದಲೂ ಮನೆಯೊಳಗೇ ಸೂತಕವೇ..
ಹಲವು ಮುಗ್ದ ಮೌನೆಯರ ನೋವ ತೊಟ್ಟಿಲಲಿ,
ಕಂಬನಿಯ ಕೂಸದು ಎದ್ದಿರಲು,
ಆಚರಿಸಲೇನಿದೆ??
ನಮ್ಮೊಳಗಿನ ರಕ್ಕಸನ ಕೊಲ್ಲುವ ಅಸ್ತ್ರವ ಹುಡುಕಲಾಗದೇ??
ಸಾಧಿಸುವುದಲ್ಲಿದೆ..
ಮಾನವನಾಗುವುದರಲ್ಲಿದೆ..
ಹೊಸ ಕರೆಯಿದು ಹಳೆಯ ಕಲೆಗಳ, ಕೊಳೆಗಳ
ಬುಡ ಪೂರ್ತಿ ತೊಳೆದು ಹಾಕಲಿ,
ಸುಖ ಶಾಂತಿ ತರಲಿ ಸರ್ವರಲಿ..

ಹೊಸ ವರುಷವು ನಾಡಿನ, ನಮ್ಮೊಳಗಿನ ಅಂಧಕಾರವನ್ನು ನೀಗಿಸಲಿ..
ಮನುಜಮತವ ಮೊಳಗಿಸಲಿ..

- ರೋಹಿತ್

www.facebook.com/rohitkumarhg1

ಕಾದು ನೋಡಿ

ಹೊಸ ಅಂಕಣ...

"ತೀರ"


ಆತ್ಮೀಯ ಒಡನಾಡಿಗಳೇ,


೨೦೧೦-೨೦೧೧ ನೇ ಸಾಲಿನ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ವಿಶೇಷವಾಗಿ ಮಾಡಲ್ಪಟ್ಟ "ತೀರ" ಎಂಬ ವೀಡಿಯೋ ತುಣುಕನ್ನು ಈ ಮೂಲಕ ನಮ್ಮ ಬ್ಲಾಗ್ ನಲ್ಲಿ upload ಮಾಡುತ್ತಿದ್ದೇವೆ. ನಮ್ಮ ವಿಭಾಗದಲ್ಲಿನ ದಿನಗಳ ನೆನಪನ್ನ ಮತ್ತೆ ನಿಮ್ಮಲ್ಲಿಗೆ ತರುವಂತಹ ಒಂದು ಪುಟ್ಟ ಪ್ರಯತ್ನವು ಇದಾಗಿದ್ದು, ನಿಮ್ಮೆಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದು ನಂಬಿದ್ದೇವೆ.


ನಿಮ್ಮ ಪ್ರತಿಯೊಂದು ಅನಿಸಿಕೆಗಳಿಗೂ ಆದರದ ಸ್ವಾಗತ.



ಈ ವೀಡಿಯೊ ತುಣುಕನ್ನು ತಯಾರಿಸಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೋರ್ವರಿಗೂ ಈ ಮೂಲಕ ಧನ್ಯವಾದವನ್ನು ಅರ್ಪಿಸುತ್ತೇವೆ.


- ರೋಹಿತ್

ತೀರ ಭಾಗ - 1

ತೀರ ಭಾಗ - 2

ತೀರ ಭಾಗ - 3

ನನ್ನ ಬೆರಳಿನೊಡನೆ ಆಡಿದ ಕನಯ್ಯ...

ನನ್ನ ಬೆರಳಿನೊಡನೆ ಆಡಿದ ಕನಯ್ಯ...