ಬದುಕನೀದು ಬದುಕುತಾಳೆ..
ತನ್ನದೆಂಬೊ ಬದುಕಿಲ್ಲಾ ಆಕೆಗೆ..
ಭುವಿಯ ಪ್ರೀತಿ ಅವಳೊಳಗೆ,
ಬಯಸಿಲ್ಲಾ ಒಂದಿಷ್ಟು ಕೂಡಾ, ತನ್ನ ತನಗೆ..
ಸೃಷ್ಟಿಯಲ್ಲಾ, ಸೃಷ್ಟಿಯ ಸೃಷ್ಟಿಕರ್ತೆ,
ಪರಿಚಯಿಸಿದಳು ಜಗವ ನಮಗೆ..
ಮಾಮನಾದ ಚಂದಿರ, ಕೃಷ್ಣ ನಮ್ಮ ಸೋದರ,
ಮಲಗುವ ಮುನ್ನದಾ ಕಥೆಯೊಳಗೆ..
ನಗೆಯ ಹಬ್ಬದಡಿಗೆ, ಮನೆಯ ಮನದೊಳಗೆ,
ದಣಿಸದವಳ, ಒಳಗೊಳಗೇ ತಾನೇರುತಿಹ ನೋವ ಬೆಟ್ಟ..
ಸಹಿಸಲಾರಳು ಎನಗೆ ಒಣ ಹುಲ್ಲು ತಾಕಿದರೂ,
ಕಂಡು ಭಗವಂತನೇ ನಮ್ಮ ಮರೆತು ಬಿಟ್ಟ..
ಅಬ್ಬಬ್ಬಾ ಹೂ-ಹೃದಯ, ಮನಸು ಮಹಾ-ಕಾವ್ಯ ,
ಪದ ಹೇಗೆ ಮುಗಿಸೀತೋ? ಇವಳ ವಿವರಿಸೋ ಕಾರ್ಯ..
ಪೊರೆದ ಮರಕೆ ಬೀಸುವಂತೆ ಕುಡಿ ಎಲೆಯು ತಂಗಾಳಿ,
ನನ್ನ ಮುದ್ದು ಅಮ್ಮನಿಗೊಂದು ಪುಟ್ಟ ಕಾವ್ಯ..
- ರೋಹಿತ್