Wednesday, August 22, 2012

ಸವಿಗನಸಲ್ಲೊಂದು ಮನಸು..

ಉದ್ದುದ್ದ ಗೀಚಿದರೆ ಮುಗಿಯದು,
ಮುದ್ದು ಮನದ ಆಳದಿ ಹೊಕ್ಕಿ ಕೂತಾ ಕದನ..
ಎಷ್ಟು ಸಾಲುಗಳಾದರೇನು? ಕವನಗಳ ಹುಚ್ಹೆದ್ದರೇನು?.. 
ವ್ಯಕ್ತವಾಗುವುದೇ? ವ್ಯಕ್ತವು ವ್ಯರ್ಥವಾಗುವುದೇ??
ತಲ್ಲಣಿಸಿದೆ ಮನ.. ..

ತನ್ನಳಿವಾದಂತಿದೆ, ನಾ ಶೂನ್ಯ ಹೊದ್ದಂತಿದೆ,
ಸರ್ವಂ ತನ್ಮಯಂ ನನ್ನೊಳಗೆ...
ನವಿರಾಗಿಯೆದ್ದ ತಿಳಿ ಗಾಳಿ, ತುಸು ತುಸುವೇ ಬೀರಿ,
ನಿನ್ನ ಬಿಂಬವನೇ ಎದಿರು ನಿಲ್ಲಿಸಿದೆ..

ಇದ್ದಕ್ಕಿದ್ದಂತೆ, ಕನಸಲ್ಲೆದ್ದಂತೆ..
ಅಲ್ಲೊಂದು ಸಿಹಿ ಮೊಗ್ಗ ಕಂಡಂತೆ..
ಕಂಪನೆರೆಯುತಾ ಹೂವಾಗಿ, ಮನವೆಂಬ ಕನ್ಯೆ ತಾ ಮುಡಿಯೇ ಅದ,
ಸ್ವರ್ಗವೇ ಕರದಿ ಸಿಕ್ಕಿ ನಿಂತಂತೆ..

ರೆಕ್ಕೆಯೆರಡು ಹುಟ್ಟಿ, ಮೊದಲಾಗಿ ಬಿಚ್ಚಿ..
ಪಟ ಪಟನೆ ಬಡಿದು ಹಾರುವ ಪ್ರಯತ್ನದಿ..
 ಭಯವು ತಬ್ಬಿದ ಮನದ, ಬಳಿ ಜಾರಿ ನೀನಪ್ಪಿದೊಡೆ,
ಬಾನಿನಾಚೆಗೆ ಬಾಳಿನಾ ಜೊತೆ ಸಾಗಿ ಬಂದಂತೆ..
 
ನೀ ಗೊಂದಲವೋ, ಮೇಲೆದ್ದ ಭಾವೋಧ್ವೇಗವೋ..?
ಭೋರ್ಗೆರೆವ ಬಿರುಗಾಳಿಯ ನಡುವೆ ನಾನಾಡುವ ಉಸಿರಾಟವೋ??
ನನ್ನೊಳಗೆ ನನಗಾಗೆಂದು ಬಂದ ಮೊದಲ ಆಲೋಚನೆಯೋ..?
ಅನುಮಾನವಿಹುದು.. ನಾ ನಾನೋ? ಅಥವ ನೀನೋ???

- ರೋಹಿತ್...

Friday, August 3, 2012

ರಕ್ಷಾ ಬಂಧನ..

ಹಿಂದಿಂದೆ ಬಂದೆ,
ಎಲ್ಲೆಲ್ಲೂ, ಹುಟ್ಟಿನಲೂ..
ನನ್ನ ಮೊದಲ ಮಗುವು ನೀ..

ನಿನ್ನಾ ತರಲೆ, ತುಂಟಾಟಗಳೋ,
ಮುಗ್ದ ಮುನಿಸೊಳು ಮುಳುಗಿಸಿ 
ಮನ್ನಿಸೇಳಿಸೋ ಆಟಗಳೂ..
ನನ್ನ ತಾಯಿಯೂ ನೀನೇ..

ನಿನ್ನೊಡನೆಯ ಒಲವ 
ನೆಪ್ಪದೋಳಾಡಿದ  ಜಗಳಗಳೋ ,
ಟೂ ಬಿಟ್ಟು ಮಾತನಾಡಿದ ಕ್ಷಣದ ನಗುವುಗಳು..
ಗೆಳತಿಯಾದವಳು ನೀನೇ..

ನೀ ನಲುಮೆಯ ತಂಗಿ, ಒಡನೆ ಬರುವೆಯಾದರೆ 
ಎಷ್ಟೇ ಜನ್ಮವು ಸಹ್ಯ ನನಗೆ..
ನನ್ನೆಲ್ಲಾ ಬದುಕುಗಳಾ ನಗುವು
ಕೂಡಿ ಬರಲೆಂದೆಂದು ನಿನಗೆ..
ಈ ಬಂಧನದ ರಕ್ಷೆಯೊಳಗಿಹೆವು
ನಾವ್ ಹೀಗೆ...
ರಕ್ಷಾ ಬಂಧನದ ಶುಭಾಷಯಗಳು
ನನ್ನ ಮುದ್ದು ತಂಗಿಗೆ...

- ರೋಹಿತ್..

ಕಾದು ನೋಡಿ

ಹೊಸ ಅಂಕಣ...

"ತೀರ"


ಆತ್ಮೀಯ ಒಡನಾಡಿಗಳೇ,


೨೦೧೦-೨೦೧೧ ನೇ ಸಾಲಿನ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ವಿಶೇಷವಾಗಿ ಮಾಡಲ್ಪಟ್ಟ "ತೀರ" ಎಂಬ ವೀಡಿಯೋ ತುಣುಕನ್ನು ಈ ಮೂಲಕ ನಮ್ಮ ಬ್ಲಾಗ್ ನಲ್ಲಿ upload ಮಾಡುತ್ತಿದ್ದೇವೆ. ನಮ್ಮ ವಿಭಾಗದಲ್ಲಿನ ದಿನಗಳ ನೆನಪನ್ನ ಮತ್ತೆ ನಿಮ್ಮಲ್ಲಿಗೆ ತರುವಂತಹ ಒಂದು ಪುಟ್ಟ ಪ್ರಯತ್ನವು ಇದಾಗಿದ್ದು, ನಿಮ್ಮೆಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದು ನಂಬಿದ್ದೇವೆ.


ನಿಮ್ಮ ಪ್ರತಿಯೊಂದು ಅನಿಸಿಕೆಗಳಿಗೂ ಆದರದ ಸ್ವಾಗತ.



ಈ ವೀಡಿಯೊ ತುಣುಕನ್ನು ತಯಾರಿಸಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೋರ್ವರಿಗೂ ಈ ಮೂಲಕ ಧನ್ಯವಾದವನ್ನು ಅರ್ಪಿಸುತ್ತೇವೆ.


- ರೋಹಿತ್

ತೀರ ಭಾಗ - 1

ತೀರ ಭಾಗ - 2

ತೀರ ಭಾಗ - 3

ನನ್ನ ಬೆರಳಿನೊಡನೆ ಆಡಿದ ಕನಯ್ಯ...

ನನ್ನ ಬೆರಳಿನೊಡನೆ ಆಡಿದ ಕನಯ್ಯ...