Saturday, August 3, 2013

ಜೀವ ಪ್ರಕೃತಿ

ಬೆಟ್ಟದಾಚೆಗಿನ ಮೇಘದೂರಿನ ಬದಿಗೆ ಒಂದಿತ್ತು 
ದೊಡ್ಡ ಅಗಸನ ಊರು. 
ಅಲ್ಲೊಬ್ಬನಿದ್ದ ದುಂಡು ಮುಖದ, 
ಕೆಂಪು ಹೊಳಪು ಕಂಗಳ ಯುವಕ.. 
ಹಸಿರು ಸೀರೆಯುಟ್ಟವಳ ಮೇಲಿತ್ತು ಮನ ಆತನ.. 
ಮಿಟುಕಿಸಿದ ಕಣ್ಣ, 
ಮೇಘಧೂತರಿಂದ ತಲುಪಿತ್ತು 
ಪ್ರೀತಿಯ ಹನಿ ಕವನ.. 
ಇಂತಿಪ್ಪ ಮಳೆಗಾಲದ ಮದುವೆಗೆ
ಮಿಂಚಿನಂತೆ ಬಂದವನದ್ದೇ ಚಿತ್ರೀಕರಣ..
ಮೊದಲ ಮೈತ್ರಿ,
ಪ್ರಥಮ ಚುಂಬನ..
ಹರಿದಿದ್ದ ಹಸಿರು ಪತ್ರದಿಂದ
ಅವಳಿ ಜನನವಾಯ್ತು ಆಮ್ಲದಿಂದ..
ಬೆಳೆದು ನಾಸಿಕಕ್ಕೆ ಹೊರಟ ಅವಳಿಗಳು,
ಗಾಳಿಚೀಲದಲ್ಲಿ ಕಬ್ಬಿಣ ಸಾಗಿಸುವವನ ಜೊತೆಕೂಡಿ,
ಗಣಿಗಾರಿಕೆಯಲೂ ಸಮ ಪಾಲಿತ್ತು,
ತನ್ನೇ ತನ್ಮಯಗೊಳಿಸಿ,
ತನ್ನೊಳಗಿನ ಕೆಟ್ಟತನವ
ತಾ ನೆಡೆದು ಬಂದ ದಾರಿಯಲೇ ಹಿಂದಿರುಗಿಸಿ ಹೊರಹಾಕಿ
ನಿಟ್ಟುಸಿರಿಟ್ಟನು..

ನಿಬ್ಬೆರಗಾಗಿ ಎಲ್ಲವ ಪಡೆದಿತ್ತು ಮನುಕುಲವು..!!


-ರೋಹಿತ್

ಕಾದು ನೋಡಿ

ಹೊಸ ಅಂಕಣ...

"ತೀರ"


ಆತ್ಮೀಯ ಒಡನಾಡಿಗಳೇ,


೨೦೧೦-೨೦೧೧ ನೇ ಸಾಲಿನ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ವಿಶೇಷವಾಗಿ ಮಾಡಲ್ಪಟ್ಟ "ತೀರ" ಎಂಬ ವೀಡಿಯೋ ತುಣುಕನ್ನು ಈ ಮೂಲಕ ನಮ್ಮ ಬ್ಲಾಗ್ ನಲ್ಲಿ upload ಮಾಡುತ್ತಿದ್ದೇವೆ. ನಮ್ಮ ವಿಭಾಗದಲ್ಲಿನ ದಿನಗಳ ನೆನಪನ್ನ ಮತ್ತೆ ನಿಮ್ಮಲ್ಲಿಗೆ ತರುವಂತಹ ಒಂದು ಪುಟ್ಟ ಪ್ರಯತ್ನವು ಇದಾಗಿದ್ದು, ನಿಮ್ಮೆಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದು ನಂಬಿದ್ದೇವೆ.


ನಿಮ್ಮ ಪ್ರತಿಯೊಂದು ಅನಿಸಿಕೆಗಳಿಗೂ ಆದರದ ಸ್ವಾಗತ.



ಈ ವೀಡಿಯೊ ತುಣುಕನ್ನು ತಯಾರಿಸಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೋರ್ವರಿಗೂ ಈ ಮೂಲಕ ಧನ್ಯವಾದವನ್ನು ಅರ್ಪಿಸುತ್ತೇವೆ.


- ರೋಹಿತ್

ತೀರ ಭಾಗ - 1

ತೀರ ಭಾಗ - 2

ತೀರ ಭಾಗ - 3

ನನ್ನ ಬೆರಳಿನೊಡನೆ ಆಡಿದ ಕನಯ್ಯ...

ನನ್ನ ಬೆರಳಿನೊಡನೆ ಆಡಿದ ಕನಯ್ಯ...