ಹಣ್ಣೆಲೆಯ ಮನಸು ಉದುರಿತು...ಪ್ರೀತಿಯಲೆಯಲಿ, ನಿರ್ಭಾರತೆಯಲಿ ತೇಲುತಲಿ..ನಿನ್ನ ತಲುಪೋ ಕನಸ ಕಂಡು ಸರಿಯುತಿರೆ ಬಳಿಗೆ..,ಕಾಣದ ಕೈ ತಿರುಗಿಸಿ ವಾಯುಚಕ್ರವ, ಎಬ್ಬಿಸಿದ ಬಿರುಗಾಳಿಗೆ,ದೂರಾಗಿ ಕಡೆಗೆ ಬಿದ್ದೆ ನಾ ನಿರಾಸೆಯ ಧೂಳಿಗೆ.
- ರೋಹಿತ್
ಕವನ ಸಂಕಲನ ಅನ್ನೋಕೆ ನಾನೇನು ದೊಡ್ಡ ಕವಿಯಲ್ಲ.. ಯಾರು ಓದಬೇಡಿ ಅನ್ನೋಕೆ ಇದು ನನ್ನ ದಿನಚರಿ ಅಂತು ಅಲ್ವೇ ಅಲ್ಲ.. ಸುಮ್ಮನಿರದ ಮನಸಿಗೆ ಕೆಲಸವಿಲ್ಲದ ಕಾಲದಲ್ಲಿ ಕೊಟ್ಟ ಮನೆಗೆಲಸಕ್ಕೆ ಸಿಕ್ಕ ಪ್ರತಿಫಲ ಅಂತ ಮಾತ್ರ ಕರಿಬೋದೇನೋ?? ಇದನ್ನ ಓದಿದ ಮೇಲೆ ನನ್ನನ್ನೇನಾದ್ರೂ ಭಗ್ನ ಪ್ರೇಮಿ ಅಂತ ಅಂದ್ಕೊಂಡ್ರೆ ಇದರಲ್ಲಿ ನನ್ನ ತಪ್ಪೇನು ಇಲ್ಲ.. ಗರಿ ಬಲಿತ ಭಾವನೆಗಳಿಗೆ ಸ್ವತಂತ್ರವಾಗಿ ಪುಟಗಳ ಮೇಲೆ ಹಾರಡೋಕೆ ಬಿಟ್ಟಿದ್ದೇನೆ ಅಷ್ಟೇ.. ಇಲ್ಲಿ ಅಭಿವ್ಯಕ್ತ ಗೊಂಡಿರುವ ಎಲ್ಲ ಭಾವನೆಗಳು ನನ್ನದಲ್ಲದೆ ಇದ್ದರೂ, ನನ್ನವರ ಭಾವನೆಗೆ ಪದವಾಗುವ ಕನಸು ನನದು.. ಆ ರೀತಿಯಲ್ಲಿ ಅವರಿಗೆ ನನ್ನ ಪುಟ್ಟ ಧನ್ಯವಾದ ಈ ರೂಪದಲ್ಲಿ. -ರೋಹಿತ್
geleya.. illi hanneleya manasu andre yaaru athva evudakke holisiddi? aamele "ninna talupo kanasa" anta heluvaaga ninna andre yaavudu?
ReplyDeleteಆ ಕವನದ ಸಾರಾಂಶ ಹೀಗಿದೆ ಕಣೋ...
ReplyDeleteನನಗೆ ಈ ಕವನ ಹೊಳೆದಿದ್ದು ಒಂದು ಎಲೆ ತನ್ನ ಮರದಿಂದ ಉದುರಿ ಬಿದ್ದಿದ್ದನು ನೋಡಿದಾಗ...
ಒಂದು ಎಲೆ ತನ್ನ ಗೂಡ(ಮರ) ತೊರೆದು ಉದುರೊತ್ತೆ... ಹಾಗೇ ಅದು ಕೆಳಗೆ ಬೀಳುವಾಗ ತಾನು ಪ್ರೀತಿಸ್ತಿರೋ ಅಲ್ಲೇ ಪಕ್ಕದಲ್ಲಿದ್ದ ತನ್ನ ಪ್ರೇಮಿಯಾದ ಇನ್ನೊಂದು ಎಲೆ ಕಡೆ ಹೋಗೋ ಕನಸನ್ನ ಕಾಣುತಾ ಪ್ರೀತಿ ಅನ್ನೋ ಗಾಳಿಯಲ್ಲಿ ತೇಲುತ್ತಾ ಹೋಗ್ತಿರೊತ್ತೆ... ಆಗ ಎಲ್ಲಿಂದಲೋ ಎದ್ದ ಬಿರುಗಾಳಿ ಅದನ್ನ ಅದರ ಪ್ರೀತಿ ಇಂದ ದೂರ ಮಾಡಿ ಧೂಳಿಗೆ ಕೆಡವಿ ಹಾಕೊತ್ತೆ...
ಇದನ್ನ ಎರಡು ತರ ಅರ್ಥ ಮಾಡ್ಕೊಬೋದು......
೧. ಪ್ರಕೃತಿಯ ಪ್ರತಿ ಕಣದಲ್ಲೂ ಪ್ರೀತಿ ತುಂಬಿದೆ ಅಂತ, ಹಾಗೇ
೨. ಆ ಎಲೆಯನ್ನ ನಮ್ಮ ಮನಸ್ಸು ಅಂತಾನೂ... ಮನಸ್ಸು ಉದುರಿ ತನ್ನ ಪ್ರೀತಿ ಕಡೆ ಹೋಗೋವಾಗ ಕರೆಯದೆ ಬಂದಂತಹ ಸನ್ನಿವೇಶಗಳು ಪ್ರೀತಿ ಇಂದ ದೂರ ಮಾಡಿತು ಅಂತಾನು ಅಂದ್ಕೊಬೋದು..