ಕದ್ದೆ ಮಡಿಕೆಯ ಬೆಣ್ಣೆಯ.. ಮುದ್ದು ಕೃಷ್ಣ ಎಂದರು..
ಕದ್ದೆ ಕನಸ ಕನ್ಯಾಮಣಿಗಳ.. ಕಳ್ಳ ಕೃಷ್ಣ ಎಂದು ಕರೆದರು..
ಕದ್ದೆ ಕನಸ ಕನ್ಯಾಮಣಿಗಳ.. ಕಳ್ಳ ಕೃಷ್ಣ ಎಂದು ಕರೆದರು..
ಅಣ್ಣನ ಹೆಸರಿಗೆ ಮಾದರಿಯಾಗಿ, ಸಾರಥಿಯಾದೆ ನೀ ಧರ್ಮಸಂಸ್ಥಾಪನೆಗೆ..
ಜೀವ ಗೆಳೆಯನು ನೀನೆ..
ನಿಂತೆ ಲೋಕದ ಒಳಿತಿಗೆ, ಅವತಾರಗಳ ನೆಪದಿ..
ಜಗದೋದ್ದಾರಕ ನೀನೆ..
ಹೆಣ್ಣ ಮನಸಿಗೆ ಪ್ರೀತಿಯ ಕಣ್ಣು, ಪಡ್ಡೆ ಹುಡುಗರ ಗುರುವೋ ನೀ..!
ಮತ್ತೆ ಬಾ ಎತ್ತಿ ಅವತಾರವ..
ತೊಲಗಿಸಿ ಕಲಿಯುಗದ ಕಂಸರ.. ಹರಿಸು ಒಲವಿನ ಕೊಳಲ ದನಿ...
- ರೋಹಿತ್
ಮುಂದುವರಿಯಲಿ ಕೃಷ್ಣನ ಲೀಲೆ :)
ReplyDeleteಅಹುದಹುದು...
ReplyDelete