Wednesday, July 7, 2010

ಕಳ್ಳ ಕನಯ್ಯ...


ಕದ್ದೆ ಮಡಿಕೆಯ ಬೆಣ್ಣೆಯ.. ಮುದ್ದು ಕೃಷ್ಣ ಎಂದರು..
ಕದ್ದೆ ಕನಸ ಕನ್ಯಾಮಣಿಗಳ.. ಕಳ್ಳ ಕೃಷ್ಣ ಎಂದು ಕರೆದರು..
 
ಅಣ್ಣನ ಹೆಸರಿಗೆ ಮಾದರಿಯಾಗಿ, ಸಾರಥಿಯಾದೆ ನೀ ಧರ್ಮಸಂಸ್ಥಾಪನೆಗೆ.. 
 ಜೀವ ಗೆಳೆಯನು ನೀನೆ..
ನಿಂತೆ ಲೋಕದ ಒಳಿತಿಗೆ, ಅವತಾರಗಳ ನೆಪದಿ.. 
 ಜಗದೋದ್ದಾರಕ ನೀನೆ.. 
ಹೆಣ್ಣ ಮನಸಿಗೆ ಪ್ರೀತಿಯ ಕಣ್ಣು, ಪಡ್ಡೆ ಹುಡುಗರ ಗುರುವೋ ನೀ..! 
ಮತ್ತೆ ಬಾ ಎತ್ತಿ ಅವತಾರವ.. 
ತೊಲಗಿಸಿ ಕಲಿಯುಗದ ಕಂಸರ.. ಹರಿಸು ಒಲವಿನ ಕೊಳಲ ದನಿ...
- ರೋಹಿತ್

2 comments:

ಕಾದು ನೋಡಿ

ಹೊಸ ಅಂಕಣ...

"ತೀರ"


ಆತ್ಮೀಯ ಒಡನಾಡಿಗಳೇ,


೨೦೧೦-೨೦೧೧ ನೇ ಸಾಲಿನ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ವಿಶೇಷವಾಗಿ ಮಾಡಲ್ಪಟ್ಟ "ತೀರ" ಎಂಬ ವೀಡಿಯೋ ತುಣುಕನ್ನು ಈ ಮೂಲಕ ನಮ್ಮ ಬ್ಲಾಗ್ ನಲ್ಲಿ upload ಮಾಡುತ್ತಿದ್ದೇವೆ. ನಮ್ಮ ವಿಭಾಗದಲ್ಲಿನ ದಿನಗಳ ನೆನಪನ್ನ ಮತ್ತೆ ನಿಮ್ಮಲ್ಲಿಗೆ ತರುವಂತಹ ಒಂದು ಪುಟ್ಟ ಪ್ರಯತ್ನವು ಇದಾಗಿದ್ದು, ನಿಮ್ಮೆಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದು ನಂಬಿದ್ದೇವೆ.


ನಿಮ್ಮ ಪ್ರತಿಯೊಂದು ಅನಿಸಿಕೆಗಳಿಗೂ ಆದರದ ಸ್ವಾಗತ.



ಈ ವೀಡಿಯೊ ತುಣುಕನ್ನು ತಯಾರಿಸಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೋರ್ವರಿಗೂ ಈ ಮೂಲಕ ಧನ್ಯವಾದವನ್ನು ಅರ್ಪಿಸುತ್ತೇವೆ.


- ರೋಹಿತ್

ತೀರ ಭಾಗ - 1

ತೀರ ಭಾಗ - 2

ತೀರ ಭಾಗ - 3

ನನ್ನ ಬೆರಳಿನೊಡನೆ ಆಡಿದ ಕನಯ್ಯ...

ನನ್ನ ಬೆರಳಿನೊಡನೆ ಆಡಿದ ಕನಯ್ಯ...